Friday 14 November 2014

ರಕ್ಷಕರ ಸಮ್ಮೇಳನ 2014-15

       ಕೇರಳ ಸರ್ವ ಶಿಕ್ಷಾ ಅಭಿಯಾನದ ನಿರ್ದೇಶದಂತೆ ಮಕ್ಕಳ ದಿನಾಚರಣೆಯಂಗವಾಗಿ "ಸ್ವಚ್ಛ ವಿದ್ಯಾಲಯ-ಸ್ಮಾರ್ಟ್ ವಿದ್ಯಾಲಯ" ಎಂಬ ಧ್ಯೇಯವನ್ನಿಟ್ಟುಕೊಂಡು ದಿನಾಂಕ 14-11-2014 ರಂದು ಮದ್ಯಾಹ್ನ 2 ಗಂಟೆಗೆ ನಮ್ಮ ವಿದ್ಯಾಲಯದಲ್ಲಿ ರಕ್ಷಕರ ಸಂಗಮ ಕಾರ್ಯಕ್ರಮ ನಡೆಸಲಾಯಿತು. PTA  ಅಧ್ಯಕ್ಷೆ ಶೋಭಾ .T  ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯರಾದ ಶ್ರೀ ಅಬ್ಬಾಸ್ .ಕೆ ಸ್ವಾಗತಿಸಿದರು. BRC  ಸಂಪನ್ಮೂಲ ವ್ಯಕ್ತಿಯಾದ  ಶ್ರೀ ಜಯರಾಂ ರವರು ಮುಖ್ಯ ಅತಿಥಿಗಳಾಗಿದ್ದುಕೊಂಡು ಉಚಿತ ಮಾರ್ಗದರ್ಶನವನ್ನು ಹೆತ್ತವರಿಗೆ ನೀಡಿದರು. ಶಿಕ್ಷಕ ಪ್ರವೀಣ್ ಕುಮಾರ್ ಹಾಗೂ ಜಯರಾಂ ಮಾಸ್ಟರ್ ಉತ್ತಮ ಜವಾಬ್ದಾರಿಯುತ ರಕ್ಷಕರ ಕರ್ತವ್ಯಗಳನ್ನು ಮನವರಿಕೆ ಮಾಡಿ ಕೊಡುತ್ತಾ ತರಗತಿ ನಡೆಸಿಕೊಟ್ಟರು. 

ಮುಖ್ಯ ಶಿಕ್ಷಕರಿಂದ ಸ್ವಾಗತ

 ಶೋಭಾ T {PTA}

 ಜಯರಾಂ ಮಾಸ್ಟರ್ {ಬ್ಲಾಕ್ ಸಂಪನ್ಮೂಲ ವ್ಯಕ್ತಿ } 

 ಉಪಜಿಲ್ಲಾ ಕ್ರೀಡಾ ಕೂಟದಲ್ಲಿ ಮಿಂಚಿದ ಪ್ರತಿಭೆಗೆ ಪುರಸ್ಕಾರ 






No comments: