Monday 12 January 2015

ಸ್ವಾಮಿ ವಿವೇಕಾನಂದರ 152ನೇ ಜನ್ಮ ದಿನ

  ಜನವರಿ 12 2015

ವಿವೇಕಾನಂದರ ಜನ್ಮ ದಿನವಾದ ಜನವರಿ ೧೨ನ್ನು ರಾಷ್ಟ್ರೀಯ ಯುವ ದಿನ ಎಂದುಆಚರಿಸಲಾಗುತ್ತದೆವಿಶ್ವಾದ್ಯಂತ ಕೂಡ ವಿವೇಕಾನಂದರ ಜಯಂತಿಯನ್ನು ಯುವ ದಿನವೆಂದೇ ಆಚರಿಸುತ್ತಾರೆ. ಇದಕ್ಕೆ ವಿಶ್ವಮನ್ನಣೆಯೂ ದೊರೆತಿದೆ .ರಾಷ್ಟ್ರಪಿತ ಮಹಾತ್ಮಾ ಗಾಂಧಿ ಒಂದು ಮಾತು ಹೇಳಿದ್ದಾರೆ.ಶ್ರೀಕೃಷ್ಣನನ್ನು ಅರಿಯಬೇಕೆಂದರೆ ಭಗವದ್ಗೀತೆಯನ್ನು ಓದಿ,ಭಾರತವನ್ನು ತಿಳಿಯಬೇಕೆಂದಿದ್ದರೆ ಸ್ವಾಮೀವಿವೇಕಾನಂದರನ್ನು ಓದಿಎಂದು. ಅಂದರೆಸ್ವಾಮೀಜಿ ಅವರ ಬದುಕೇ ಇಡೀ ಭಾರತದ ಚಿತ್ರಣ. ಅವರ ಜೀವನವೇ ಒಂದು ಯಶೋಗಾಥೆ.ನರೇಂದ್ರರೇನೂ ಹುಟ್ಟು ಸನ್ಯಾಸಿಯಲ್ಲ. ಅವರು ಈ ವಿಶ್ವದಗಮನ ಸೆಳೆದಿದ್ದು ಕೇವಲ ೭ ವರ್ಷಗಳ ಅವಧಿಯಲ್ಲಿ. ಅವರು ಯುಗಪುರುಷರೆನಿಸಿದ್ದು ೧೮೯೩-೧೯೦೦ರ ನಡುವಿನ ಕೇವಲ ಸಪ್ತ ವರ್ಷಗಳಲ್ಲಿ. ಆ ಸಪ್ತ ವರ್ಷದಲ್ಲಿ ಅವರಕೀರ್ತಿ,ಖ್ಯಾತಿ ಸಪ್ತದ್ವೀಪಾ ವಸುಂದರಾ ಎನ್ನುವಂತೆ ಇಡೀ ವಿಶ್ವಕ್ಕೇ ಹಬ್ಬಿತ್ತು. ವಿಶ್ವಧರ್ಮ ಸಮ್ಮೇಳನದಲ್ಲಿ ಪಾಲ್ಗೊಂಡ ಬಳಿಕ ಅಮೆರಿಕ,ಇಂಗ್ಲೆಂಡ್,ಯುರೋಪ್ ಹಾಗೂ ಭಾರತದಲ್ಲಿ ಅವರುಮಾಡಿದ ಭಾಷಣ,ಬರೆದಪತ್ರಗಳು,ನಡೆಸಿದ ಚರ್ಚೆ ಇಂದಿಗೂ ಆಕರ ಗ್ರಂಥಗಳಾಗಿವೆ. ವಿಶ್ವಜಾಗೃತಿಯಸೋಪಾನಗಳಾಗಿವೆ. ಹೀಗಾಗಿಯೇ ವಿಶ್ವ ಅವರನ್ನು ಯುಗಾಚಾರ್ಯ ಎಂದು ಗುರುತಿಸಿದ್ದು.ಸ್ವಾಮಿ ವಿವೇಕಾನಂದರ ಬಗ್ಗೆ ಕಗ್ಗದ ಕವಿ ಶ್ರೇಷ್ಠ ಡಿ.ವಿ.ಜಿ. ಹೀಗೆ ಹೇಳುತ್ತಾರೆ:ಸ್ವಾಮಿ ವಿವೇಕಾನಂದರು ಸ್ವಾಭಾವಿಕವಾಗಿ ಅದ್ಭುತ ಪ್ರತಿಭಾ ಸಂಪನ್ನರು. ಅವರ ಬುದ್ಧಿ ವಿದ್ಯುದ್ವೇಗದಿಂದಸಂಚಾರ ಮಾಡತಕ್ಕದ್ದು,ಅದುಒಮ್ಮೆ ಲೀಲೆಯಿಂದ ಸಮುದ್ರ ತಳಕ್ಕೆ ಧುಮುಕುವುದು,ಇನ್ನೊಮ್ಮೆ ಪಕ್ಷಿಯಂತೆ ಗಿರಿಶಿಖರಕ್ಕೆ ಹಾರುವುದು. ಮತ್ತೊಮ್ಮೆ ಹುಲ್ಲುಗಾವಲಿನ ಮೇಲೆ ಮಂದ ಮಾರುತದಂತೆ ಸುಳಿದಾಡುವುದು. ಒಂದು ತೀಕ್ಷ್ಣತೆ,ಒಂದು ಲಘುತೆ,ಒಂದು ಆವೇಶ,ಒಂದು ವಿಲಾಸ - ಇವು ಆ ಬುದ್ಧಿಯಗುಣಗಳು. ಅವರು ಸಂಸ್ಕೃತದಲ್ಲಿ ವ್ಯಾಕರಣ ತರ್ಕಶಾಸ್ತ್ರಗಳನ್ನು ಸಾಂಗವಾಗಿ ಅಭ್ಯಾಸ ಮಾಡಿದ್ದರು. ಹಾಗೆಯೇ ಇಂಗ್ಲಿಷಿನಲ್ಲಿ ಕಾವ್ಯ ಇತಿಹಾಸಗಳನ್ನೂ ವಿಜ್ಞಾನಶಾಸ್ತ್ರ ತತ್ತ್ವ ಮೀಮಾಂಸೆಗಳನ್ನೂ ವಿಸ್ತಾರವಾಗಿ ಪರಾಮರ್ಶಿಸಿ ಸ್ವಾಧೀನಪಡಿಸಿಕೊಂಡಿದ್ದರು. ಈ ಉಭಯ ವಿದ್ಯಾಪ್ರಾವೀಣ್ಯಕ್ಕೆ ಅನುರೂಪವಾದವಾಗ್ಧೋರಣೆ,ತದನುಗುಣವಾದ ಉತ್ತಾಲಧ್ವನಿ,ಉನ್ನತವಾದ ವರ್ಚಸ್ವಿಯಾದ ಗಂಭೀರಾಕಾರ,ಸಕಲ ಜನಮನೋಗ್ರಾಹಿಯಾದ ಹಾಸ್ಯ ವಿನೋದ ರಸಿಕತೆ,ಹೃದಯವಿದ್ರಾವಕವಾದ ಗಾನಮಾಧುರ್ಯ ಇದೆಲ್ಲವೂಅವರಲ್ಲಿ ಸಮ್ಮಿಳಿತವಾಗಿದ್ದವು.
 ಈ ನಾನಾಗುಣಶಕ್ತಿಗಳಿಗೆ ಕಿರೀಟಪ್ರಾಯವಾಗಿದ್ದುದು ಶ್ರೀರಾಮಕೃಷ್ಣ ಪರಮಹಂಸ ಗುರುಗಳ ಅನುಗ್ರಹ’’.ಡಿವಿಜಿ ಅವರಮನದಾಳದ ಈ ಮಾತುಗಳು ಇಡೀವಿವೇಕಾನಂದರ ಮೇರು ವ್ಯಕ್ತಿತ್ವವನ್ನುಸಂಕ್ಷಿಪ್ತವಾಗಿಪರಿಚಯಿಸಿಬಿಡುತ್ತವೆ. ಅವರ ಅಭಿಪ್ರಾಯದ ಕೊನೆಯ ಸಾಲುಗಳು ಗುಣಶಕ್ತಿಗಳಿಗೆ ಕಿರೀಟಪ್ರಾಯವಾದದ್ದು ಶ್ರೀರಾಮಕೃಷ್ಣ ಪರಮಹಂಸ ಎಂಬುದನ್ನು ಸಾರುತ್ತವೆ. ನರೇಂದ್ರದತ್ತರು ವಿವೇಕಾನಂದರಾದದ್ದೇ ರಾಮಕೃಷ್ಣ ಪರಮಹಂಸರಿಂದ.ಬಾಲ್ಯದಿಂದಲೂ ದೇವರ ಅನ್ವೇಷಣೆಯಲ್ಲಿ ತೊಡಗಿದ್ದ ನರೇಂದ್ರದತ್ತರು ದೇವರಿದ್ದಾನೆಯೇ?ಅವನಿದ್ದಲ್ಲಿ ಅವನು ಯಾವ ರೀತಿ ಇದ್ದಾನೆ?ಇದ್ದರೆ ನಮಗೇಕೆ ಕಾಣುವುದಿಲ್ಲ?ಮನುಷ್ಯನೊಂದಿಗೆ ಅವನ ಸಂಬಂಧವೇನು?ಎಲ್ಲೆಲ್ಲೂ ಅಕ್ರಮ,ಅನ್ಯಾಯ ತುಂಬಿರುವ ಈವಿಶ್ವವನ್ನು ಅವನು ನಿರ್ಮಿಸಿದನೇಕೆ?ಎಂಬಿತ್ಯಾದಿ ಪ್ರಶ್ನೆ ಕೇಳಿ ತಾಯಿ,ತಂದೆ,ಗುರುಗಳಿಗೆ ಇರುಸು ಮುರುಸು ಉಂಟುಮಾಡುತ್ತಿದ್ದರು.
ಬಾಲ್ಯದಿಂದಲೂ ಬಲು ತಂಟೆಕೋರರಾಗಿದ್ದ ನರೇಂದ್ರ,ತಾಯಿ ಬೈದರೂ,ಹೊಡೆದರೂ ಜಗ್ಗುತ್ತಿರಲಿಲ್ಲ. ಆದರೆ,ತಲೆಯ ಮೇಲೆ ತಾಯಿ ನೀರು ಚುಮುಕಿಸಿ ಶಿವಶಿವ ಎಂದರೆ ಮಂತ್ರಮುಗ್ಧರಾದವರಂತೆ ತಟಸ್ಥರಾಗಿಬಿಡುತ್ತಿದ್ದರು. ನರೇಂದರು ಚಿಕ್ಕವರಾಗಿದ್ದಾಗ,ಒಂದು ದಿನ ಬೆಳಗ್ಗೆ ತಾಯಿಗೆ ಹನುಮಂತ ಎಲ್ಲಿದ್ದಾನೆ ತೋರಿಸುಎಂದು ಹಠ ಹಿಡಿದರು,ಆಗ ತಾಯಿ ಊರಂಚಿನ ಬಾಳೆಯ ತೋಟದಲ್ಲಿದ್ದಾನೆ ಎಂದು ಹೇಳಿ ಕಾಟ ತಪ್ಪಿಸಿಕೊಂಡರು. ಆದರೆ ತಾಯಿಯ ಮಾತನ್ನು ವೇದ ವಾಕ್ಯಎಂದು ತಿಳಿದ ನರೇಂದ್ರರು ಬಾಳೆಯ ತೋಟಕ್ಕೆ ಹೋಗಿ ಹುಡುಕಾಡಿದರು,ಹನುಮನಿಗಾಗಿ ಕಾದು ಕುಳಿತರು. ಸಂಜೆಯಾಯಿತು,ರಾತ್ರಿಯಾಯಿತು ವಿಚಲಿತರಾಗದೆ ಆಂಜನೇಯ ಬಂದೇ ಬರುತ್ತಾನೆ ಎಂದು ನಿರೀಕ್ಷಿಸಿದರು. ರಾತ್ರಿಯಾದರೂ ಮಗ ಮನೆಗೆ ಬಾರದಿದ್ದಾಗ ಹುಡುಕಾಡಿದ ತಾಯಿ ಭುವನೇಶ್ವರಿ ದೇವಿ ಬಾಳೆಯ ತೋಟಕ್ಕೆ ಹೋಗಿ,ಶ್ರೀರಾಮದೇವರ ಆಣತಿಯ ಮೇರೆಗೆ ಹನುಮ ಇಂದು ಬೇರೆಡೆ ಹೋಗಿದ್ದಾನೆ ಇನ್ನೊಂದು ದಿನ ಕಾಣಿಸುತ್ತಾನೆ ಬಾ ಎಂದು ಮಗನನ್ನು ಸಮಾಧಾನ ಮಾಡಿ ಮನೆಗೆ ಕರೆತಂದರು. ತನ್ನ ಮಾತಿನ ಬಗ್ಗೆ,ದೇವರ ಬಗ್ಗೆ ಮಗನಿಗಿರುವ ನಂಬಿಕೆಗೆ ತಾಯಿ ಅವಕ್ಕಾಗಿದ್ದರು.ಹೀಗೆ ಭಗವಂತನ ಅನ್ವೇಷಣೆಯಲ್ಲಿದ್ದ ನರೇಂದ್ರರಿಗೆ ಭಗವಂತನಿದ್ದಾನೆಂಬಉತ್ತರ ಸಿಕ್ಕಿದ್ದು,ಭಗವತ್ ಸಾಕ್ಷಾತ್ಕಾರವಾಗಿದ್ದು ದಕ್ಷಿಣೇಶ್ವರದಲ್ಲಿ ಶ್ರೀರಾಮಕೃಷ್ಣರ ಶಿಷ್ಯರಾದ ಬಳಿಕ. ಕಾಳಿದೇವಿಯನ್ನು ದೇವರೆಂದು ಒಪ್ಪಿದ ನರೇಂದ್ರರನ್ನು ೧೮೮೬ರಲ್ಲಿ ಪರಮಹಂಸರು ಕೆಲಕಾಲ ನಿರ್ವಿಕಲ್ಪ ಸಮಾಧಿ ಸ್ಥಿತಿಯಲ್ಲಿರಿಸಿದೈವಸಾಕ್ಷಾತ್ಕಾರ ಮಾಡಿಸಿದ್ದರು. ೧೮೮೭ರ ಜನವರಿಯಲ್ಲಿ ವಿರಾಜಹೋಮ ಮಾಡಿಸನ್ಯಾಸ ಸ್ವೀಕರಿಸಿದ ನರೇಂದ್ರರು ಮೊದಲಿಗೆ ಸಚ್ಚಿದಾನಂದ ಎಂಬ ಹೆಸರು ಪಡೆದರು,ನಂತರ ವಿವಿಧೀಶಾನಂದ ಎಂಬ ಹೆಸರು ಪಡೆದು ದೇಶ ಪರ್ಯಟನೆ ಮಾಡಿದರು. ೧೮೯೨ರಲ್ಲಿ ಕನ್ಯಾಕುಮಾರಿಗೆಬಂದು ಕೊರೆಯುವ ಚಳಿಯಲ್ಲಿ ಸಮುದ್ರದಲ್ಲಿ ಈಜಿ ಕನ್ಯಾಕುಮಾರಿಯ ಬೆಟ್ಟದ ಮೇಲೆ ಶಿಲೆಯಂತೆ ನಿಂತು ಅಖಂಡಭಾರತವನ್ನು ಅಡಿಯಿಂದ ಮುಡಿಯವರೆಗೆ ದರ್ಶಿಸಿದರು.ಭಾರತಾಂಬೆಯ ಸಂದೇಶಆಲಿಸಿದರು. ಅಮೆರಿಕದಲ್ಲಿ ನಡೆಯಲಿದ್ದ ವಿಶ್ವಧರ್ಮ ಸಮ್ಮೇಳನದಲ್ಲಿ ಪಾಲ್ಗೊಳ್ಳುವ ನಿರ್ಧಾರ ಮಾಡಿದರು. ಆಗ ಈ ವಿದೇಶ ಪ್ರವಾಸಕ್ಕೆ ನೆರವು ನೀಡಿದ ಖೇತಡಿಯ ಮಹಾರಾಜ ಅಜಿತ್‌ಸಿಂಹತಮ್ಮಲ್ಲಿ ವಿವೇಕವನ್ನೂ ಮತ್ತು ದರಿದ್ರ ನಾರಾಯಣನ ಸೇವೆಯಲ್ಲಿ ಆನಂದವನ್ನು ಪಡೆಯುತ್ತಿದ್ದ ವಿವಿಧೀಶಾನಂದ(ನರೇಂದ್ರ)ರಿಗೆ ವಿವೇಕಾನಂದ ಎಂಬ ಹೆಸರುನೀಡಿದರು.ಹೊಸ ಸೂರ್ಯನ ಉದಯ: ಅಜಿತ ಸಿಂಹರ ಆರ್ಥಿಕ ನೆರವು ಪಡೆದು ೧೮೯೩ರ ಮೇ ೩೧ರಂದು ಮುಂಬೈ ಬಂದರಿನಿಂದ ಹೊರಟು ಚೀಣಾ,ಹಾಂಕಾಂಗ್ ಮತ್ತು ಜಪಾನ್ ಮಾರ್ಗವಾಗಿ ಅಮೆರಿಕಕ್ಕೆ ತಲುಪಿದ ವಿವೇಕಾನಂದರು ೧೮೯೩ರ ಸೆಪ್ಟೆಂಬರ್ ೧೧ರಂದು ಸೋಮವಾರ ಶಿಕಾಗೋ ನಗರದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಕೆಲವೇ ನಿಮಿಷಗಳ ಭಾಷಣ ಅವರನ್ನು ಯುಗಪುರುಷನನ್ನಾಗಿಮಾಡಿತು. ಭಾರತದಸನಾತನ ಧರ್ಮದ ಹಿರಿಮೆ ವಿಶ್ವಕ್ಕೇ ತಿಳಿಯಿತು. ಅಂದು ವಿಶ್ವದಲ್ಲಿ ಹೊಸ ಸೂರ್ಯನ ಉದಯವಾಗಿತ್ತು.ಅಂದು ಸರ್ವಧರ್ಮ ಸಭೆಯನ್ನೊಮ್ಮೆ ದಿಟ್ಟಿಸಿ ನೋಡಿದ ಸ್ವಾಮೀಜಿ,ಮಾತೆ ಸರಸ್ವತಿಯನ್ನೂ,ತಮ್ಮ ಗುರುದೇವನನ್ನೂ ನೆನೆದುಅಮೆರಿಕದ ನನ್ನ ಭ್ರಾತೃ,ಭಗಿನಿಯರೆಎಂದು ಸಂಬೋಧಿಸಿ ನೆರೆದಿದ್ದ ಎಲ್ಲರಲ್ಲೂ ಭ್ರಾತೃತ್ವದ ಭಾವನೆ ಹುಟ್ಟು ಹಾಕಿದ್ದರು.ವಿಶ್ವಧರ್ಮ ಸಮ್ಮೇಳನದಲ್ಲಿ ಸ್ವಾಮೀಜಿ ಭಾಷಣ ಕೇಳಿದ ಬಳಿಕ ಅಮೆರಿಕದ ಪ್ರಮುಖ ಪತ್ರಿಕೆ ಹೀಗೆ ಬರೆಯಿತು. ಸರ್ವಧರ್ಮ ಸಮ್ಮೇಳನದಲ್ಲಿವಿವೇಕಾನಂದರೇ ಶ್ರೇಷ್ಠ ವ್ಯಕ್ತಿ. ಅವರ ಭಾಷಣ ಕೇಳಿದ ಬಳಿಕ ಇಂತಹ ಸುಸಂಸ್ಕೃತರ ದೇಶಕ್ಕೆ ನಾವು ಧರ್ಮ ಪ್ರಚಾರಕರನ್ನು ಕಳುಹಿಸುವುದು ಮೂರ್ಖತನವಾದೀತು.’’ಸ್ವಾಮೀಜಿ ಅವರ ಭಾಷಣ ಭಾರತದ ಮೇಲೆ ಇಡೀ ವಿಶ್ವ ಸಮುದಾಯಕ್ಕಿದ್ದ ತಪ್ಪು ಕಲ್ಪನೆಗಳನ್ನು ದೂರ ಮಾಡಿತು. ಇಡೀ ವಿಶ್ವವೇ ಭಾರತದತ್ತ ಗೌರವದಿಂದ ನೋಡುವಂತೆ ಮಾಡಿತು. ಭಾರತದ ಬಗ್ಗೆ ವಿಶ್ವಕ್ಕೇ ಗೌರವಮೂಡಿಸಿದ ಆ ಮಹಾನ್ ಚೇತನವನ್ನು ಸ್ಮರಿಸುವುದು ನಮ್ಮ ಕರ್ತವ್ಯ ಅಲ್ಲವೇ?ಜನನ:೧೮೬೩-೧೯೦೨ರ ಅವಧಿಯಲ್ಲಿ ಈ ಭೂಮಿಗೆ ಭೇಟಿ ನೀಡಿದ್ದ ಅದಮ್ಯ ಚೇತನ ಸ್ವಾಮಿ ವಿವೇಕಾನಂದರು ಭಾರತೀಯ ಸನಾತನ ಸಂಸ್ಕೃತಿಯ ಹರಿಕಾರ. ಆಧುನಿಕ ಯುಗಮಾನದ ಅಗತ್ಯಗಳಿಗೆ ಅನುಗುಣವಾಗಿ,ನವ ವಿಶ್ವದ ನೂತನ ಪ್ರಶ್ನೆಗಳಿಗೂ ಉತ್ತರ ಕೊಟ್ಟು ಬಾಳುವಷ್ಟು ಜೀವಾಳ ಸನಾತನ ಹಿಂದೂ ಧರ್ಮದಲ್ಲಿ ಖಂಡಿತವಾಗಿಯೂ ಇದೆ ಎಂದು ಪ್ರತಿಪಾದಿಸಿದ ಧರ್ಮೋದ್ಧಾರಕ,ಅಪ್ರತಿಮ ವಾಗ್ಮಿ,ಅನುಪಮ ಮಾನವತಾವಾದಿ,ವೀರ ಸನ್ಯಾಸಿ ವಿವೇಕಾನಂದರು.ವಿವೇಕಾನಂದರ ಪೂರ್ವಾಶ್ರಮದ ಹೆಸರು ನರೇಂದ್ರ ದತ್ತ. ಕೋಲ್ಕತ್ತಾದಲ್ಲಿ ಕ್ರಿಸ್ತಶಕ ೧೮೬೩ರ ಜನವರಿ ೧೨ರಂದು ಪುಷ್ಯ ಸಂಕ್ರಾಂತಿಯ ದಿನ ಪುಣ್ಯ ಪ್ರಭಾತದಲ್ಲಿ ಸಾಧ್ವಿ ಭುವನೇಶ್ವರಿ ದೇವಿ ಅವರ ಪುತ್ರನಾಗಿ ಜನಿಸಿದ ನರೇಂದ್ರರು ಲೋಕ ಮೆಚ್ಚಿದ ದಿವ್ಯ ಸ್ವರೂಪ. ಯುವಜನರ ಪಾಲಿನ ಮಹಾನ್ ಚೈತನ್ಯ ಮೂರ್ತಿ.ನರೇಂದ್ರರತಂದೆ ವಿಶ್ವನಾಥ ದತ್ತರು ಅಂದಿನ ಕಾಲದಲ್ಲಿಯೇ ಹೈಕೋರ್ಟ್ ಅಟಾರ್ನಿಯಾಗಿದ್ದರು. ಪ್ರತಿಷ್ಠಿತ ಮನೆತನದಲ್ಲಿ ಹುಟ್ಟಿ,ಇಂಗ್ಲಿಷ್ಸಾಹಿತ್ಯ,ಸಂಗೀತಗಳನ್ನೂ ಕಲಿತ ನರೇಂದ್ರರು ಸಾಮಾನ್ಯರಂತೆಯೇ ಇದ್ದರು. ಅವರೇನು ಪವಾಡ ಪುರುಷರಲ್ಲ. ತಮ್ಮ ೨೧ನೇ ವಯಸ್ಸಿನಲ್ಲಿ ತಂದೆ ನಿಧಿನರಾದಾಗ,ಅವರ ಸಂಸಾರ ಸಾಲದ ಶೂಲಕ್ಕೆ ಸಿಲುಕಿ ಕ್ಲೇಶ ಅನುಭವಿಸಿತ್ತು. ಆ ಎಲ್ಲ ನೋವು,ನಲಿವುಗಳನ್ನೂ ನರೇಂದ್ರರು ಅನುಭವಿಸಿದ್ದರು.ನರೇಂದ್ರರು ಬಾಲ್ಯದಲ್ಲಿಎಲ್ಲ ಮಕ್ಕಳಂತೆ ಆಡಿ,ಹಾಡಿ ಬೆಳೆದವರು. ಆಟ,ಪಾಠ,ಗರಡಿ ಸಾಧನೆಯ ಜೊತೆಗೆ ನಿಸ್ಸೀಮ ಗಾಯನ ಪ್ರತಿಭೆಯನ್ನು ಹೊಂದಿದ್ದರು. ನಿರ್ಭಯ ನಿರ್ಭೀತಿಯ ಮನೋಭಾವದ ನರೇಂದ್ರರು ಯಾವುದನ್ನೂ ಸುಲಭವಾಗಿ ಒಪ್ಪಿಕೊಳ್ಳುತ್ತಿರಲಿಲ್ಲ. ಎಲ್ಲವನ್ನೂ ಪ್ರಶ್ನಿಸುವ ಮನೋವೃತ್ತಿ ಅವರಲ್ಲಿತ್ತು. ಪ್ರಶ್ನಿಸದೆ,ಪರಾಮರ್ಶಿಸದೆ ಅವರು ಯಾವುದನ್ನೂ,ಏನನ್ನೂ ಒಪ್ಪುತ್ತಿರಲಿಲ್ಲ.೧೯ನೇ ಶತಮಾನದಲ್ಲಿ ಭಾರತೀಯ ಸಂಸ್ಕೃತಿಯ ಪುನರ್ಜಾಗರಣ ಕಾರ್ಯ ಮಾಡಿದ ಅಗ್ರಗಣ್ಯರೆಂದರೆ ಸ್ವಾಮಿ ವಿವೇಕಾನಂದರು.ಸಂಸ್ಕೃತಿಯ ಹಿರಿಮೆ: ಸ್ವಾಮಿ ವಿವೇಕಾನಂದರನ್ನು ಸಾಂಸ್ಕೃತಿಕ ಪುನರುತ್ಥಾನದ ಹರಿಕಾರ ಎಂದಾಗ. ಸಂಸ್ಕೃತಿಎಂದರೆ ಏನು ಎಂಬ ಪ್ರಶ್ನೆ ಉದ್ಭವಿಸುತ್ತದೆ. ನನ್ನ ಗುರುಗಳು ಸಂಸ್ಕೃತಿಯ ಬಗ್ಗೆ ಹೀಗೆಹೇಳುತ್ತಿದ್ದರು. ಹೂವಿನ ಗಿಡವೊಂದರಲ್ಲಿ ಹೂವು ಬಿಡುತ್ತದೆ ಅದು ಪ್ರಕೃತಿ,ಅದೇ ಹೂವನ್ನು ಯಾರಾದರೂ ಕಿಡಿಗೇಡಿಗಳು ಕಿತ್ತು ಎಸೆದರೆ ಅದು ವಿಕೃತಿ,ಅದೇ ಗಿಡದಲ್ಲಿರುವ ಹೂವನ್ನು ಗಿಡಕ್ಕೂ ನೋವಾಗದಂತೆ ಕಿತ್ತು,ಅದಕ್ಕೆ ನೀರು ಚುಮುಕಿಸಿ ಪರಿಶುದ್ಧಗೊಳಿಸಿ ದಾರದ ನೆರವಿನಿಂದ ಮಾಲೆ ಕಟ್ಟಿದರೆ ಅದಾಗುತ್ತದೆಆಕೃತಿ. ಆ ಆಕೃತಿಯನ್ನು ನಾವು ದೇವರ ವಿಗ್ರಹಕ್ಕೂ,ನಮ್ಮಪೂಜ್ಯ ಮಾತಾ ಪಿತೃಗಳ ಪದಕಮಲಕ್ಕೋ ಅರ್ಪಿಸುತ್ತೇವಲ್ಲಅದು ನಮ್ಮ ಸಂಸ್ಕೃತಿ ಎಂದು.ಇಷ್ಟು ಅರ್ಥಗರ್ಭಿತವಾದ ಸಂಸ್ಕೃತಿಯ ಬಗ್ಗೆ ವಿನೋಭಾ ಬಾವೆ ಅವರು ಹೀಗೆ ಹೇಳುತ್ತಾರೆ. ನಮ್ಮೆಲ್ಲರಿಗೂ ಹೊಟ್ಟೆ ಹಸಿಯುತ್ತದೆ. ನಾವು ಹಸಿವು ನೀಗಿಸಿಕೊಳ್ಳಲು ಊಟ ಮಾಡುತ್ತೇವೆ ಅದು ಪ್ರಕೃತಿ. ನಮಗೆ ಹೊಟ್ಟೆ ಹಸಿವಿಲ್ಲದಿದ್ದರೂಯಾರೋ ಉಚಿತವಾಗಿ ಕೊಡಿಸಿದರೆಂದು ಸಿಕ್ಕಾಪಟ್ಟೆ ತಿನ್ನುವುದು ವಿಕೃತಿ,ಆದರೆ ನಮ್ಮ ಬಳಿ ಇರುವ ಆಹಾರವನ್ನೇ ನಾಲ್ಕು ಜನರ ಜೊತೆ ಹಂಚಿತಿನ್ನುವುದೇ ನಿಜವಾದ ಸಂಸ್ಕೃತಿ ಎಂದು.ಈ ಎಲ್ಲ ಸಂಸ್ಕೃತಿಯ ವ್ಯಾಖ್ಯಾನಕ್ಕೆನಿಜ ಭಾಷ್ಯ ಬರೆದವರು ಸ್ವಾಮಿ ವಿವೇಕಾನಂದರೇ ಭಾರತವನ್ನು ಸಂಪೂರ್ಣ ಸುತ್ತಿ ದೇಶದ ಜನರ ಬಡತನವನ್ನು ಕಣ್ಣಾರೆ ಕಂಡ ಸ್ವಾಮೀಜಿ ದರಿದ್ರನಾರಾಯಣನ ಸೇವೆಗೆ ಮುಂದಾದರು.ತಮ್ಮ ಅಪ್ರತಿಮ ಮಾನವತಾವಾದವನ್ನು ಮರೆದರು. ಹೀಗಾಗಿಯೇ ವಿವೇಕಾನಂದರು ಭಾಷೆ,ಜಾತಿ,ಸಂಪ್ರದಾಯ,ವರ್ಗಗಳನ್ನು ಮೀರಿನಿಂತುರಾಷ್ಟ್ರೀಯ ಏಕತೆ ಮತ್ತು ಸಾಂಸ್ಕೃತಿಕ ಜಾಗೃತಿಯ ಪ್ರತೀಕವಾಗಿ ನಿಲ್ಲುತ್ತಾರೆ.ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ ಎಂದು ಯುವಕರಿಗೆ ಕರೆಕೊಟ್ಟ ವಿವೇಕಾನಂದರಿಗೆ ಯುವಶಕ್ತಿಯ ಮೇಲೆ ಅಪಾರವಾದ ನಂಬಿಕೆ ಇತ್ತು. ಯುವಶಕ್ತಿಗೆಮಿಗಿಲಾದದ್ದು ಯಾವುದೂ ಇಲ್ಲ. ನನಗೆ ೧೦೦ಜನ ಗಟ್ಟಿ ಮುಟ್ಟಾದ ಚೈತನ್ಯ ಸ್ವರೂಪರಾದ ಯುವಕರನ್ನು ಕೊಡಿ ನಾವುನವಭಾರತದ ನಿರ್ಮಾಣ ಮಾಡುತ್ತೇನೆ ಎನ್ನುತ್ತಿದ್ದರು ಸ್ವಾಮೀಜಿ.ಯುವಕರುಹೇಡಿಗಳಾಗಬಾರದು ಪುರುಷ ಸಿಂಹಗಳಾಗಬೇಕು,ನೀವು ಎಂದೂ ಪರಾವಲಂಬಿಗಳಾಗಬಾರದು,ನಿಮ್ಮ ಬದುಕಿನ ಶಿಲ್ಪಿಗಳು ನೀವೇ ಎಂದು ಪ್ರತಿಪಾದಿಸುತ್ತಿದ್ದ ಸ್ವಾಮೀಜಿ ಅವರು ಯುವಜನರಿಗೆ ನೀಡಿರುವ ಒಂದೊಂದುಸಂದೇಶವೂ ಒಂದೊಂದು ಜೀವನ ಧರ್ಮವಾಗಿದೆ.ಹೀಗಾಗಿಯೇ ಸ್ವಾಮಿ ವಿವೇಕಾನಂದರ ಹೆಸರು ಕೇಳಿದರೆ,ಅಕ್ಷರಶಃರೋಮಾಂಚನವಾಗುತ್ತದೆ. ವಿವೇಕವಾಣಿಯನ್ನು ಕೇಳುತ್ತಿದ್ದರೆ,ವಿವೇಕಾನಂದರ ಸಂದೇಶಗಳನ್ನು ಓದುತ್ತಿದ್ದರೆ,ಮೈಪುಳಕಿತವಾಗುತ್ತದೆ. ಮನಸ್ಸು ನಿರ್ಮಲವಾಗುತ್ತದೆ. ತನುವಿನಲ್ಲಿಹೊಸ ಚೈತನ್ಯ ಒಡಮೂಡುತ್ತದೆ.

No comments: